ER NEWS

News Subject: 
ಇಂದಿನ ರಾಶಿ ಭವಿಷ್ಯ: 19 ಅಕ್ಟೋಬರ್ 2017
Upload Image: 
Body: 

ಮೇಷ:- ಭಾವನಾತ್ಮಕ ಒತ್ತಡಗಳಿಗೆ ಸಿಲುಕದಿರಿ. ಪ್ರಯತ್ನಶೀಲರಿಗೆ ಜಯವು ದೊರೆಯುವುದು. ಗುರುವಿನ ಕೃಪೆಗಾಗಿ ಪ್ರಾರ್ಥನೆ ಮಾಡಿರಿ. ಈದಿನ ಕಾಲು ಕೆಜಿ ಕಡಲೆಕಾಳನ್ನು ದಾನ ಮಾಡಿರಿ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.

ವೃಷಭ:- ಇಂದು ನಿಮ್ಮ ಮನಸ್ಸು ನಿರಾಳವಾಗಿರುವುದು. ಅಲ್ಲದೆ ಮನಸ್ಸಿನ ತಾಕಲಾಟಗಳಿಗೆ ಮುಕ್ತಿ ದೊರೆಯುವುದು. ಆರೋಗ್ಯದ ಸಲುವಾಗಿ ಅತಿಯಾದ ಔಷಧ ಸೇವನೆ ಮಾಡುವುದು ಉತ್ತಮವಲ್ಲ.

ಮಿಥುನ:- ಅತ್ಯಂತ ವಿವೇಕಶಾಲಿ ಮತ್ತು ಬುದ್ಧಿಶಾಲಿಯಾದ ನಿಮ್ಮ ಇಡೀ ವ್ಯಕ್ತಿತ್ವದ ಒಂದು ದೊಡ್ಡ ಸರಕು. ನಿಮ್ಮ ಪ್ರಾಮಾಣಿಕತನವು ಎಲ್ಲರಿಂದ ಪ್ರಶಂಸೆಗೆ ಒಳಪಡುವುದು. ಕೌಟುಂಬಿಕ ಜೀವನದಲ್ಲಿ ಮಾನಸಿಕ ನೆಮ್ಮದಿ ದೊರೆಯುವುದು.

ಕಟಕ:- ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ವೈಫಲ್ಯ ಉಂಟಾಗುವ ಸಾಧ್ಯತೆ ಇದ್ದು ಶಿವನ ಆರಾಧನೆಯಿಂದ ಒಳಿತಾಗುವುದು. ಆದರೆ ಅದಕ್ಕಾಗಿ ದೃತಿಗೆಡದೆ ಮರಳಿ ಯತ್ನವ ಮಾಡುವುದರಿಂದ ಯಶಸ್ಸನ್ನು ಹೊಂದುವಿರಿ.

ಸಿಂಹ:- ಅತ್ಯಂತ ಸ್ವಾಭಿಮಾನಿಯಾದ ನೀವು ಇತರರು ಹೇಳುವ ಮಾತಿನಿಂದ ಕ್ರೋಧಕ್ಕೆ ಒಳಗಾಗುವಿರಿ. ಅತಿಯಾದ ಸ್ವಾಭಿಮಾನವು ಇತರರಿಗೆ ಅಹಂ ಆಗಿ ತೋರುವುದು. ಆದ್ದರಿಂದ ನೆರೆಹೊರೆಯವರೊಡನೆ ಸ್ವಲ್ಪ ಸೌಜನ್ಯದಿಂದ ವರ್ತಿಸಿರಿ.

ಕನ್ಯಾ:- ‘ಅತಿ ವಿನಯಂ ದೂರ್ತಲಕ್ಷಣಂ ಎಂದರು ಹಿರಿಯರು. ಈದಿನ ಅತಿ ವಿನಯದಿಂದ ನಿಮ್ಮ ಮುಂದೆ ಬರುವ ಜನರಿಂದ ಮೋಸಕ್ಕೆ ಒಳಗಾಗುವ ಸಾಧ್ಯತೆ ಇರುವುದು. ಇದರ ಒಳವಿಚಾರಗಳನ್ನು ಸೂಕ್ಷ್ಮವಾಗಿ ತಿಳಿದು ಅವರಿಂದ ದೂರವಿರಿ.

ತುಲಾ:- ಜೀವನದ ಏಳ್ಗೆಗಾಗಿ ಸಂಕಲ್ಪ ಮಾಡಿದ್ದೀರಿ. ನಿಮ್ಮ ಸಂಕಲ್ಪವು ನಿಜವಾದ ಕಾಳಜಿಯಿಂದ ಕೂಡಿದ್ದರೆ ಮಾತ್ರ ಭಗವಂತನು ಸಹಾಯ ಮಾಡುವರು. ನಿಮಗೆ ಈ ಹಿಂದೆ ಸಹಾಯ ಮಾಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.

ವೃಶ್ಚಿಕ:- ಅನ್ಯರ ವಿಚಾರದಲ್ಲಿ ತಲೆ ಹಾಕದಿರಿ. ಅನ್ಯರೂ ಕೂಡಾ ನಿಮ್ಮ ವಿಚಾರದಲ್ಲಿ ಮೂಗು ತೂರಿಸುವುದನ್ನು ತಡೆಯಿರಿ. ಗುರುವಿನ ಕೃಪೆಯಿಂದ ಮನೆಯಲ್ಲಿ ಮಂಗಳ ಕಾರ್ಯಗಳ ಪ್ರಸ್ತಾಪ ನಡೆಯುವುದು.

ಧನಸ್ಸು:- ಜನ್ಮಸ್ಥ ಶನಿಯು ಮಾನಸಿಕ ವಿಕಾರವನ್ನುಂಟು ಮಾಡುವುದರಿಂದ ಕೆಲಸ ಕಾರ್ಯಗಳಲ್ಲಿ ತಪ್ಪು ನುಸುಳುವ ಸಾಧ್ಯತೆ ಇದೆ. ಆಲಸ್ಯ, ಜಡತ್ವವನ್ನು ತೊರೆದು ಕಾರ್ಯದಲ್ಲಿ ಪ್ರವೃತ್ತರಾಗುವುದರಿಂದ ಕೆಲಸದಲ್ಲಿ ಜಯವನ್ನು ಕಾಣುವಿರಿ.

ಮಕರ:- ಗುರು ಕಾರುಣ್ಯದಿಂದ ಈದಿನ ಹಮ್ಮಿಕೊಂಡ ಕೆಲಸ ಕಾರ್ಯಗಳು ಸುಗಮವಾಗಿ ಆಗುವವು. ಆದರೆ ಅದಕ್ಕಾಗಿ ವಿಪರೀತ ಹಣ ಕೈಬಿಡುವುದು. ಮಿತ್ರರು ಸಕಾಲದಲ್ಲಿ ನೆರವು ನೀಡುವುದರಿಂದ ಉತ್ತಮ ಫಲಿತಾಂಶ ಕಾಣುವಿರಿ.

ಕುಂಭ:- ಮಾತಾ ದುರ್ಗಾದೇವಿಯ ಪ್ರಾರ್ಥನೆಯಿಂದ ಈದಿನದ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಿರಿ. ದುರ್ಗೆಯು ದುಷ್ಟ ಜನರನ್ನು ಬಡಿದು ಶಿಷ್ಟರನ್ನು ರಕ್ಷಿಸುವಂತೆ ಈದಿನ ನೀವು ಮಾಡುವ ಒಳ್ಳೆಯ ಕಾರ್ಯಗಳಿಗೆ ರಕ್ಷೆ ನೀಡುವಳು.

ಮೀನ:- ಹತ್ತಿರದವರಿಂದಲೇ ಹೊಸ ಸಮಸ್ಯೆಯು ಎದುರಾಗುವ ಸಾಧ್ಯತೆ. ಆದರೆ ಮಾತಿನಲ್ಲಿ ಕುಶಲಿಗಳಾದ ನೀವು ಅದನ್ನು ಸಮರ್ಥವಾಗಿ ಬಗೆಹರಿಸುವಿರಿ. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರಿ. ಹಣಕಾಸು ಉತ್ತಮವಾಗಿರುತ್ತದೆ.

Reach Count: 
1