ER NEWS

News Subject: 
ಮನ್ ಕಿ ಬಾತ್' ಬದಲಾಗಿ ಸಿಎಂ ಸಿದ್ದರಾಮಯ್ಯ ನವರಿಂದ 'ಲೂಟ್ ಕೀ ಬಾತ್; ಯಡಿಯೂರಪ್ಪ
Upload Image: 
Body: 

ಬಡವರೊಂದಿಗೆ ಚೆಲ್ಲಾಟವಾಡುತ್ತಿರುವ ಸಿಎಂ ಆಧುನಿಕ ಭಸ್ಮಾಸುರ. ರಾಜ್ಯ ಪ್ರವಾಸ ಮಾಡುವ ವೇಳೆ ಈ ಸರಕಾರದ ಬಣ್ಣ ಬಯಲು ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಹಿರಿಯೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ 'ಮನ್ ಕಿ ಬಾತ್' ಬದಲಾಗಿ ಸಿಎಂ ಸಿದ್ದರಾಮಯ್ಯ 'ಲೂಟ್ ಕೀ ಬಾತ್' ಮಾಡುತ್ತಿದ್ದಾರೆ. ಪ್ರಧಾನಿಯನ್ನು ಟೀಕೆ ಮಾಡಿದರೆ ನಾನು ದೊಡ್ಡವನಾಗುತ್ತೇನೆ ಅನ್ನೋ ಭ್ರಮೆಯಲ್ಲಿ ಸಿಎಂ ಇದ್ದಾರೆ. ಬಿಬಿಎಂಪಿನಲ್ಲಿನ ಕಾರ್ನರ್ ನಿವೇಶನಗಳನ್ನು ಅಡ ಇಟ್ಟು ಸಾವಿರ ಕೋಟಿ ಪಡೆದಿದ್ದಾರೆ. ಅದೂ ಸಾಲದು ಅಂತ ಮತ್ತೆ ಎಂಟುನೂರು ಕೋಟಿ ಪಡೆಯಲು ನೋಟಿಸ್ ಕೊಡುವ ಮೂಲಕ ಸರಕಾರದ ಖಜಾನೆ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯವನ್ನು ಸಾಲಗಾರ ರಾಜ್ಯ ಮಾಡುವ ಉದ್ದೇಶ ಸಿಎಂಗಿದೆ.ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂಬ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ಹೈಕೋರ್ಟ್ ತೀರ್ಪು ಸ್ವಾಗತಾರ್ಹ. ರಾಜಕಾರಣಿಗಳು ಕಳೆದ ಚುನಾವಣೆಯಲ್ಲಿ ಗೆದ್ದಂತೆ ಈ ಬಾರಿ ಗೆಲ್ಲುವುದು ಅಸಾಧ್ಯ. ಗೆಲ್ಲುವ ಭ್ರಮೆಯಲ್ಲಿರಲು ಸಾಧ್ಯವಿಲ್ಲ. ಜನರು ಬುದ್ದಿವಂತರಾಗಿದ್ದಾರೆ. ವೇಣುಗೋಪಾಲ್ ಅವರ ಬಗ್ಗೆ ಟೀಕಿಸುವುದಿಲ್ಲ. ಅವರ ಕರ್ತವ್ಯ ಅವರು ಮಾಡುತ್ತಾರೆ ಎಂದು ಬಿಎಸ್ ವೈ ಹೇಳಿದರು.

Reach Count: 
1