ER NEWS
News Subject:
ರಾಹುಲ್ ಮುಂದಿನ ಪ್ರಧಾನಿ ನಿಶ್ಚಿತ: ವೇಣುಗೋಪಾಲ್
Upload Image:
Body:
ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿಗೆ ತಕ್ಕ ಪಾಠ ಕಲಿಸಲಿದ್ದು, ರಾಹುಲ್ಗಾಂಧಿ ದೇಶದ ಪ್ರಧಾನಮಂತ್ರಿ ಆಗುವುದು ನಿಶ್ಚಿತ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬೂತ್ ಕಮಿಟಿ ಅಧ್ಯಕ್ಷರ, ಪದಾಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು
ಕಾಂಗ್ರೆಸ್ನಲ್ಲಿ ರಾಹುಲ್ಗಾಂಧಿಗೆ ಪಟ್ಟ ಕಟ್ಟಲು ಸಿದ್ಧತೆ ನಡೆದಿರುವ ಹೊತ್ತಲ್ಲಿಯೇ ವೇಣುಗೋಪಾಲ್ ಈ ಹೇಳಿಕೆ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿ ಆಡಳಿತದ ಬಗ್ಗೆ ಜನಕ್ಕೆ ಸದಾಭಿಪ್ರಾಯ ಇಲ್ಲ. ಅಚ್ಛೇದಿನ್ ಎಂಬುದು ಅಂಬಾನಿ, ಅದಾನಿ, ಜೈಶ್ಗೆ ಮಾತ್ರ ಬಂದಿದ್ದು ಜನ ಸಾಮಾನ್ಯರಿಗೆ ಅಚ್ಛೇದಿನ್ ಬಂದಿಲ್ಲ ಎಂದರು.
Reach Count:
1