ER NEWS
ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸುತ್ತಿರುವ ನನ್ನನ್ನು ನೋಡಿದರೆ ಕೆಲವರಿಗೆ ಹೊಟ್ಟೆಕಿಚ್ವು, ಅಸೂಯೆ. ಹೀಗಾಗಿ ವೃಥಾ ಟೀಕೆ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು,ಹೊಟ್ಟೆಕಿಚ್ವು ಪಡುವವರೇ ಸುಟ್ಟು ಹೋಗುತ್ತಾರೆ. ಅವರಿಗೇ ಕೆಟ್ಟದಾಗುತ್ತದೆ. ನನಗೆ ಒಳ್ಳೆಯದೇ ಆಗುತ್ತದೆ ಎಂದರು.
ಜನಪರ ಕಾರ್ಯಕ್ರಮಗಳು ನನಗೆ ಮುಖ್ಯ. ಹೀಗಾಗಿ ಯಾರ ಟೀಕೆಗೂ ಹೆದರುವುದಿಲ್ಲ. ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಕಾಂಗ್ರೆಸ್ ಸೇರಲು ಬೆಂಗಳೂರಿನ ಪೀರನ್ ಎಂಬುವರು ಕಾರಣ. ನನ್ನ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ನಡುವೆ ಸಭೆ ಏರ್ಪಾಡು ಮಾಡಿದವರು ಪೀರನ್. ಅಹಮದ್ ಪಟೇಲ್ ಅವರು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿಸಿದರು. ಇದು ಸತ್ಯ. ಪಕ್ಷ ಸೇರಲು ಸೋನಿಯಾಗಾಂಧಿ ಅವರು ನನಗೆ ಆಗ ಆಹ್ವಾನ ನೀಡಿದರು.
ನನ್ನ ರಾಜಕೀಯ ಜೀವನದಲ್ಲಿ ನನ್ನನ್ನು ನಂಬಿದವರಿಗೆ ದ್ರೋಹ ಮಾಡಿಲ್ಲ. ಮಾಡುವುದೂ ಇಲ್ಲ. ಆದರೆ ವಿರೋಧ ಮಾಡುತ್ತೇನೆ. ಮಾಡಿ ಧೈರ್ಯವಾಗಿ ಎದುರಿಸುತ್ತೇನೆ. ರಾಜಕೀಯ ಯಾರ ಸ್ವತ್ತೂ ಅಲ್ಲ. ಜನರ ಆಶೀರ್ವಾದ ಇರುವ ವರೆಗೆ ಅಧಿಕಾರದಲ್ಲಿ ಇರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.