ER NEWS
News Subject:
ಹುಬ್ಬಳ್ಳಿಯಲ್ಲಿ ಭಾರಿ ಮಳೆ : ಹಲವು ಮನೆಗಳಿಗೆ ನುಗ್ಗಿದ ನೀರು
Upload Image:
Body:
ಧಾರವಾಡ ಜಿಲ್ಲೆಯಲ್ಲಿ ರಾತ್ರಿಯಿಡಿ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ರಾತ್ರಿ ಮಳೆ ಸುರಿದಿದ್ದರಿಂದ ಕುಂದಗೋಳ ತಾಲೂಕಿನ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ತಾಲೂಕಿನ ಹಳ್ಯಾಳ, ಕಡಪಟ್ಟಿ ಅಲ್ಲಾಪೂರ ಸೇರಿದಂತೆ ಇತರೆ ಗ್ರಾಮಗಳಲ್ಲಿನ ಮನೆಗಳು ಜಲಾವೃತಗೊಂಡಿವೆ. ಮಳೆಯ ಅಬ್ಬರದಿಂದ ಈ ಗ್ರಾಮಗಳ ಜನರು ತತ್ತರಿಸಿದ್ದು, ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ನಿದ್ದೆ ಮಾಡದೇ ಜನರು ರಾತ್ರಿಯೆಲ್ಲಾ ನೀರಿನಲ್ಲೇ ಜಾಗರಣೆ ಮಾಡಿದರು. ಸಾಮಗ್ರಿಗಳು ಸೇರಿದಂತೆ ದವಸ ಧಾನ್ಯಗಳು ನೀರಿನಲ್ಲಿ ಮುಳುಗಿವೆ. ಕೆಲವರು ರಾತ್ರಿ ಊಟ ಬಿಟ್ಟು ನೀರಿನ ಮಧ್ಯೆ ಕಾಲ ಕಳೆದರು.
Reach Count:
1