ER NEWS

News Subject: 
ಅಮಿತ್‌ ಶಾ ಮಾಯಾ ಮಂತ್ರಗಳು ಇಲ್ಲಿ ನಡೆಯೋದಿಲ್ಲ: ಸಿಎಂ
Upload Image: 
Body: 

ರಾಜ್ಯಕ್ಕೆ ಸಾವಿರಾರು ಶಾ ಗಳು, ಮೋದಿಗಳು ಬಂದರೂ ಅವರ ಆಟ ಕರ್ನಾಟಕದಲ್ಲಿ ನಡೆಯೋದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, 2018ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಯಡಿಯೂರಪ್ಪ ಇಬ್ಬರೂ ಜೈಲಿಗೆ ಹೋಗಿ ಬಂದ ಗಿರಾಕಿಗಳು, ಯಾರೇ ಬಂದರೂ ನಮ್ಮ ವಿಜಯವನ್ನು ತಡೆಯಲು ಸಾಧ್ಯವಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಶಾ... ನಾ ಮಾಯಾ ಮಂತ್ರಗಳು ಕರ್ನಾಟಕದಲ್ಲಿ ನಡೆಯೋದಿಲ್ಲ, ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಶಾ, ಯಡಿಯೂರಪ್ಪ ಹೇಳುತ್ತಿದ್ದಾರೆ. ರಾಜ್ಯ ಸರಕಾರ, ಸಚಿವರ ಮೇಲೆ ಯಾವುದೇ ಒಂದು ಹಗರಣವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಾವು ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲ್ಲ ಇಲ್ಲಿ ಅಂತಹ ರಾಜಕಾರಣ ನಡೆಯೋದಿಲ್ಲ. ಮೋದೀದು ಮನ್ ಕಿ ಬಾತ್, ಕಾಂಗ್ರೆಸ್‌ನದು ಕಾಮ್ ಕಿ ಬಾತ್ ಎಂದು ಸಿಎಂ ಹೇಳಿದರು.

Reach Count: 
1