ER NEWS

News Subject: 
ಅಮೇಥಿಯಲ್ಲಿ ಕಲೆಕ್ಟರ್‌ ಕಚೇರಿ ನಿರ್ಮಿಸಲಾಗದವರು ಗುಜರಾತ್‌ ಅಭಿವೃದ್ಧಿ ಮಾಡುವರೆ? ರಾಹುಲ್‌ ವಿರುದ್ಧ ಯೋಗಿ ತೀಕ್ಷ್ಣ ವಾಗ್ದಾಳಿ
Upload Image: 
Body: 

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅಭಿವೃದ್ಧಿಯ ಬೆಂಬಲಿಗರಲ್ಲ, ವಿನಾಶದ ಬೆಂಬಲಿಗರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.'ಇಶ್ರತ್‌ ಜಹಾನ್‌ಳಂತಹ ಭಯೋತ್ಪಾದಕರನ್ನು ಗುಜರಾತ್‌ನ ಭದ್ರತಾ ಪಡೆಗಳು ಕೊಂದು ಹಾಕಿದಾಗ ರಾಹುಲ್‌ ಗಾಂಧಿ ಆಕೆಯನ್ನು ಬೆಂಬಲಿಸಿದ್ದರು' ಎಂದು ರ‍್ಯಾಲಿಯೊಂದರಲ್ಲಿ ಮಾತನಾಡುತ್ತಾ ಅವರು ನುಡಿದರು.

'ಕಾಂಗ್ರೆಸ್‌ ಅಭಿವೃದ್ಧಿಯ ಸಂಕೇತವಲ್ಲ, ಅದು ವಿಧ್ವಂಸಕತೆಯ ಸಂಕೇತ' ಎಂದು ಅವರು ಪುನರುಚ್ಚರಿಸಿದರು. ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಕಡೆಗಣಿಸಿದ್ದಾರೆ. ಅವರ ಕ್ಷೇತ್ರ ಅಮೇಥಿಯಲ್ಲಿ ಒಂದು ಕಲೆಕ್ಟರೇಟ್‌ ಕಚೇರಿ (ಜಿಲ್ಲಾಧಿಕಾರಿ ಕಚೇರಿ) ಕಟ್ಟಡವನ್ನೂ ಅವರು ನಿರ್ಮಿಸಿಕೊಟ್ಟಿಲ್ಲ ಎಂದು ಯೋಗಿ ಆದಿತ್ಯನಾಥ್‌ ದೂಷಿಸಿದರು.

Reach Count: 
1